ಸಂಚಿಕೆ ೭, ೧೪ ಡಿಸೆಂಬರ್, ೨೦೦೭
Submitted by Gopinatha Rao on December 21, 2007 - 4:40pm.
ಸಾಹಿತ್ಯ ಸಮ್ಮೇಳನದಲ್ಲಿ
ಏನಿದೆ ಇಲ್ಲಿ ಬಡ ಕವಿಗಳ ಪಾತ್ರ
ಅವರಿಗೆ ಕೇಳಲು ಭಾಷಣಗಳು ಮಾತ್ರ
ಗಮನಿಸುವವರಿಲ್ಲ ಅವರ ಪಾಡು
ದೊರೆತರೆ ಪುಣ್ಯ ಮೊಸರನ್ನ - ಲಾಡು
ಪ್ರತಿಭೆಯ ಬೆಳಕು
ಪ್ರತಿಭೆ ಅನ್ನುವುದು ಬೆಳಕಿನ ಗೂಡು
ಅದರ ಕಿರಣ ಇಡೀ ನಾಡು
ಕೇಳದು ಅದು ಧರ್ಮ ಜಾತಿ
ಹೋದ ಕಡೆ ಅದರದ್ದೇ ಖ್ಯಾತಿ
ಅವಳ ಹೃದಯ
ಬಡಿದಾಗ ಹೃದಯದ ಕದ
ಮನಸ್ಸಿಗೆ ಚಂಚಲ, ಮುದ
ಕೊನೆಗೆ ಆಗಿಬಿಟ್ಟರಂತೂ ಲಗ್ನ
ಸುಂದರ ಸ್ವಪ್ನಗಳಿಗೆ ವಿಘ್ನ!








