ಸಂಚಿಕೆ ೬, ೭ ಡಿಸೆಂಬರ್ ೨೦೦೭
Submitted by Gopinatha Rao on December 7, 2007 - 4:45pm.
ಮೌಲ್ಯ
ತೊಳೆದರೆ ನೀರಲ್ಲಿ ಮಣ್ಣಿನ ಮೂರ್ತಿ
ಕೆಸರಾಗಿ ಕರಗುವುದು ಪೂರ್ತಿ
ದುರಹಂಕಾರವು ಹೀಗೆ ಏರಿದರೆ ತಲೆ
ಅಧಿಪತಿಗೂ ಭಿಕ್ಷುಕನ ಬೆಲೆ
ಬಯಕೆಗಳು
ಆಶೆಗಳ ಎಬ್ಬಿಸಿದರೆ ತಟ್ಟಿ
ಮುಗಿಯದು ಬಯಕೆಗಳ ಪಟ್ಟಿ
ಹಿಗ್ಗಿದಂತೆ ಇದರ ಹಸಿವು
ಇರುವ ಸುಖದಲ್ಲೂ ನೋವು
ಪರಿಣಾಮ
ಮೊದಲು ನಯನಗಳ ಭಾಷೆ
ನಂತರ ಮನಕುದಿಯುವ ಆಶೆ
ಉರಿದರೆ ಹೃದಯದ ಜ್ಯೋತಿ
ಮುಂದೆ ಅವಳೇ ಶ್ರೀಮತಿ








