ಸಂಪುಟ ೪ ಸಂಚಿಕೆ ೩೮ ಜುಲೈ ೧೧, ೨೦೦೮
Submitted by Gopinatha Rao on July 18, 2008 - 3:01pm.
ಕೆ.ಎಫ್.ಸಿ. ಕರ್ನಲ್
ಮುಗಿಸಿದಾಗ ಬಾಳಿನ ಅರವತ್ತನೆಯ ಪುಟ
ಹುಟ್ಟಿತು ಜೀವನದಲ್ಲಿ ಸಾಧಿಸುವ ಹಠ
ಅರೆದ ಮಸಾಲೆ, ಮಿಶ್ರಣಗಳನ್ನು ಗುದ್ದಿ
ಕೆಂಟಕಿ ಹೆಸರಿನಲ್ಲೀಗ ಜಗವೆಲ್ಲ ಪ್ರಸಿದ್ಧಿ
ಸಂಕಷ್ಟ ಬಂದಾಗ
ತೀರಿಸಲು ಇದ್ದರೂ ಹರಕೆಗಳು ಹತ್ತು
ಅದಕ್ಕೆ ಬರಲಿಲ್ಲ ಶುಭಘಳಿಗೆಯ ಹೊತ್ತು
ಒಮ್ಮೆ ಇಳಿದ ಬಳಿಕ ಸಂಕಷ್ಟದ ಭಾರ
ಸುಖದಲ್ಲಿ ನೆನಪುಗಳು ಬಲು ದೂರ
ಇ-ಮೇಲು
ಮುರಿದ ಅಕ್ಷರಗಳಲ್ಲಿ ಕೆಲವು ಸಾಲು
ಕ್ಷಣದಲ್ಲಿ ತಲುಪುತ್ತದೆ ಸಾವಿರಾರು ಮೈಲು
ಅಂಚೆಯವನ ಓಲೆಯೆಂದರೆ ಸವಿಬೆಲ್ಲ
ಆ ರುಚಿ ಇಲ್ಲಿ ಕಾಣಿಸುವುದೇ ಇಲ್ಲ








