ಸಂಪುಟ 4 ಸಂಚಿಕೆ 37, ಜೂನ್ 27, 2008
Submitted by arshad on July 4, 2008 - 1:22pm.
ಅದೃಷ್ಟ ನಂಬಿಕೊಂಡರೆ
ಅದೃಷ್ಟವಲ್ಲ ಸದಾ ಜೊತೆ
ನಂಬಿ ಕೈಕೊಟ್ಟರೆ ಉರಿಸೀತು ಚಿತೆ
ಬೇಡ ಅಂಕೆಗಳಲ್ಲಿ ಭಾಗ್ಯದ ನಿರೀಕ್ಷೆ
ಸಾಗಲಿ ಶ್ರಮ ಪ್ರಯತ್ನದಲ್ಲೇ ಪರೀಕ್ಷೆ
ಸಾವಿನ ಎದುರು
ಎಷ್ಟೇ ಇರಲಿ ಕಾರುಬಾರು
ಸಾವಿನ ಎರುದಲ್ಲ ದರ್ಬಾರು
ನಿಂತು ಕರೆದರೆ ಮಧ್ಯರಾತ್ರಿಯ ವೇಳೆ
ಅನ್ನುವಂತಿಲ್ಲ ಹೋಗು, ಬಾ ನಾಳೆ
ಗುಣ ಮತ್ತು ಶೃಂಗಾರ
ಹಾಕಿಕೊಳ್ಳಲಿ ರಾಶಿ ಬಂಗಾರ
ಮಾಡಿಕೊಳ್ಳಲಿ ಆಧುನಿಕ ಶೃಂಗಾರ
ಬದಲಾಗದಿದ್ದರೆ ಗುಣ ನಡತೆ
ಹೆಣ್ಣನ್ನು ಸುಂದರವೆನ್ನಲು ಏನು ಅರ್ಹತೆ?








