ಸಂಚಿಕೆ ೨, ೯ ನವೆಂಬರ್ ೨೦೦೭
Submitted by Gopinatha Rao on November 9, 2007 - 6:01pm.
ಈ ದೀಪಾವಳಿಗೆ
ಬರಲಿ ಆನಂದ ಕದ ಬಡಿದು
ಸಾಗಲಿ ಸುಖಶಾಂತಿ, ಕೈ ಹಿಡಿದು
ಮುಗಿಯಲಿ ಬಾಳಿನ ಕೊರಗು
ಮೂಡಲಿ ಹಬ್ಬದಲ್ಲಿ ಹೊಸ ಮೆರುಗು
ವಾಸ್ತವ
ನಿಜ, ಬದುಕು ಅನ್ನುವುದು ಸಂತೆ
ಹೇಳಿ ಯಾರಿಗಿಲ್ಲ ಚಿಂತೆ?
ಹೇಳುವುದು ಸುಲಭ ಕಷ್ಟದಲ್ಲೂ ನಕ್ಕು ಬಿಡಿ
ಅಂತಹವರು ಅಪರೂಪ, ಇದ್ದರೆ ಹೆಕ್ಕಿ ಕೊಡಿ
ರಾಜಕಾರಣಿ ಇದ್ದರೆ
ವಾಚಿಸಲು ಕೊಟ್ಟರು ಹತ್ತಾರು ಸಾಲು
ಓದಿದರು ಕವಿಗಳು ತಮ್ಮ ಪಾಲು
ಓರ್ವ ರಾಜಕಾರಣಿಗೂ ನೀಡಿದರು ಅವಕಾಶ
ಮಾಡಿದ ಕವಿಗೋಷ್ಠಿಯ ಸರ್ವನಾಶ








