ಸಂಚಿಕೆ ೨೪, ೧೧ ಎಪ್ರಿಲ್, ೨೦೦೮
Submitted by Gopinatha Rao on April 18, 2008 - 2:52pm.
ಊರಿನ ಮಳೆ
ಋತುಮಾನವಿಲ್ಲದೆ ಸುರಿಯಿತು ಮಳೆ
ನಾಶವಾಯಿತು ಭರವಸೆಯಿಟ್ಟ ಬೆಳೆ
ದೇವನಿಗಿಂತ ವಿಜ್ಞಾನವೇ ಆದರೆ ಮೇಲು
ಎದುರಾಗುವುದು ಇಂತಹ ಸವಾಲು
ಮತಭಿಕ್ಷೆಗೆ
ಆದಂತೆ ಚುನಾವಣೆಯ ಘೋಷಣೆ
ಇನ್ನು ಹಳ್ಳಿ ಹಳ್ಳಿಗೆ ಬರುತ್ತಾರೆ ಪ್ರದಕ್ಷಿಣೆ
ಗೆದ್ದಾಗ ತಿರುಗಿನೋಡಲಿಲ್ಲ ಹಿಂದೆ
ಈಗ -'ಕಾಪಾಡು ಓ ನನ್ನ ತಂದೆ'
ಯುದ್ಧ ಮತ್ತು ಕೈದಿ
ಮುಗಿದ ಬಳಿಕ ಯುದ್ಧ
ತಿಳಿಯುವುದು ಯಾರು ಗೆದ್ದ
ಲಗ್ನವೂ ಹೀಗೇ ಒಂದು ರಣರಂಗ-
ಸೋತರೆ ವಾಸಿ ಇವನಿಗಿಂತ ಮಂಗ!








