ಸಂಚಿಕೆ ೧, ೨ ನವೆಂಬರ್ ೨೦೦೭
Submitted by Gopinatha Rao on November 2, 2007 - 5:06pm.
ನಮ್ಮ ಕನ್ನಡ
ಹಬ್ಬಿಕೊಂಡು ನೆರೆಕರೆಯ ದಾಳಿ
ನಮ್ಮ ಕನ್ನಡವಾಗಿದೆ ದಿವಾಳಿ
ಎನ್ನಡ ಎಕ್ಕಡಗಳ ಗಲಾಟೆಯ ಮಧ್ಯೆ
ನಮಗಂತೂ ಸೊಗಸಾದ ನಿದ್ದೆ
ಮೌಲ್ಯ
ಯಾವುದೇ ಇರಲಿ ಜನಾಂಗ ರಾಷ್ಟ್ರ
ಮಾನವೀಯತೆಯೇ ಸರ್ವ ಶ್ರೇಷ್ಠ
ಬೆಳಗುತ್ತಾ ಹೋದಂತೆ ಅದರ ದೀಪ
ಕರಗಿ ಹೋಗುವುದು ಅಶಾಂತಿಯ ಶಾಪ
ಅಜ್ಜಿ ಕಥೆಗಳು
ಅಜ್ಜಿಗೆ ಆವರಿಸಿದರೂ ಮುದಿತನ
ಆಕೆಯ ಕಥೆಗಳಲ್ಲಿತ್ತು ಸದಾ ಹೊಸತನ
ಇಂದು ಟಿವಿ ಧಾರಾಹಾವಿಗಳ ಸುಗ್ಗಿ
ಅವಳ ಉತ್ಸಾಹವೂ ಹೋಗಿದೆ ಕುಗ್ಗಿ








