ಸಂಚಿಕೆ ೧೮, ಫೆಬ್ರವರಿ ೨೯, ೨೦೦೮
Submitted by Gopinatha Rao on March 7, 2008 - 5:58pm.
ಎಲ್ಲರೂ ಉಗ್ರರಲ್ಲ
ಉಗ್ರವಾದಕ್ಕೆ ಕೊಡದಿರಿ ರಕ್ಷೆ
ಯಾರೇ ಆಗಲಿ ಸಿಗಲಿ ಶಿಕ್ಷೆ
ಆದರೆ ಎಲ್ಲರಿಗೂ ಮಾಡದಿರಿ ಬೊಟ್ಟು
ಅದು ತರುವುದು ನೋವು-ಸಿಟ್ಟು
ಮೊದಲ ಬರಹ
ಪತ್ರಿಕೆಯಲಿ ಮೂಡಿದ ಪ್ರಥಮ ಕವನ
ಸಿಕ್ಕಂತೆ ಖುಷಿ, ಮೊದಲ ವೇತನ
ಅದನ್ನು ಓದಿದಷ್ಟೂ ಇನ್ನೂ ಆನಂದ
ಹಳೆಯದಾದಷ್ಟೂ ಹೊಸ ಸುಗಂಧ
ಟ್ರಾಫಿಕ್ ಮತ್ತು ಚುಟುಕುಗಳು
ಹೇಳಬೇಕೇ ನನ್ನ ಚುಟುಕುಗಳಿಗೆ ಪ್ರೇರಣೆ
ಹೆಂಡತಿಯಂತೂ ಖಂಡಿತಾ ಅಲ್ಲ, ದೇವರಾಣೆ
ಆಮೆ ನಡಿಗೆಯಲ್ಲಿ ಸಾಗಿದಾಗ ನನ್ನ ವಾಹನ
ಅಲ್ಲೇ ಹೆರಿಗೆ, ಈ ಚುಟುಕುಗಳ ಜನನ








