ಸಂಚಿಕೆ ೮, ಡಿಸೆಂಬರ್ ೨೧, ೨೦೦೭

ಕವಿ ಮತ್ತು ಸಾಲ

ಸಾಲ ಮಾಡಿ ಪ್ರಕಟಿಸಿದರು ನನ್ನ ಪತಿ
ಸಾಹಿತ್ಯ ಸೇವೆಗಾಗಿ ಮೂರು ಕೃತಿ
ಕಾದರು ಬರುವುದೆಂದು ಪ್ರಶಸ್ತಿ ಪುರಸ್ಕಾರ
ಸೋತು ಮಾರಿದ್ದಾರೆ ನನ್ನ ಒಡವೆ ಬಂಗಾರ

ಗಾಂಧೀಜಿ ಹೇಳಿದ್ದು

ನನ್ನ ತತ್ವಗಳಿಗೆ ಕೊಟ್ಟು ಲೇಪನ
ಮಾಡದಿರಿ ಕುರ್ಚಿಯ ಜೋಪಾನ
ಸೇವೆಗಿಂತ ನಿಮ್ಮ ನಾಲಗೆಯೇ ಉದ್ದ
ಸ್ವಾರ್ಥಕ್ಕಾಗಿ ದೇಶವನ್ನೇ ಮಾರಲು ಸಿದ್ಧ

ಅಂದು ಇಂದು

ಅಂದು ನೀನು ಹೂ, ನಾನು ದುಂಬಿ
ಚೆಲ್ಲುತ್ತಿತ್ತು ಪ್ರೀತಿಯು ತುಂಬಿ
ಈಗ ಪ್ರೀತಿಯಂತೂ ಮಾಯ
ತಲೆತುಂಬ ಲಟ್ಟಣಿಗೆ ಗಾಯ

Syndicate

Syndicate content